………. – ೧೦ Posted on ನವೆಂಬರ್ 17, 2023ಏಪ್ರಿಲ್ 28, 2023 by ಮಮತ ಜಿ ಸಾಗರ ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
ಹನಿಗವನ ಹಿತೋಪದೇಶ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 6, 2023 0 ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****
ಹನಿಗವನ ಅಪಾಯ ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 21, 2023 0 ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****
ಹನಿಗವನ ಘೋಷಣೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 17, 2023 0 “ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]