ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ
ಪಾತ್ರೆಯ ಬಳಸುತ ಮನಸಾರ,
ಪರರಿಗೆ ಮಡಕೆಯ ಮಹಿಮೆಯ ದಿನವೂ
ಬೋಧಿಸುತಿರುವನು ಕುಂಬಾರ.
*****
Related Posts
ಸಮಸ್ಯೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 18, 2023
- 0
ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ವೈಖರಿ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 26, 2025
- 0
ಮಣ್ಣಿನ ಮಗನ ಆಡಳಿತ ಬಲು ಭರ್ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****
