ಸಹವಾಸ ಮಹಿಮೆ

ಸಜ್ಜನನಿದ್ದರೆ ಖೂಳರ ಕೆಳೆಯಲಿ
ಅವನುದ್ಧಾರವದೆಲ್ಲಿ?
ಚಂದನ ಸೇರಿರೆ ಸೌದೆಯ ಹೊರೆಯಲಿ
ಒಲೆಗದು ಉರಿಯುವ ಕೊಳ್ಳಿ.
ಭವಿಗಳ ಮೇಲಿರೆ ಅನುಭಾವಿಯ ಕೃಪೆ
ಕಳ್ಳಿಯೂ ಮಲ್ಲಿಗೆ ಬಳ್ಳಿ.
ಚಂದ್ರನ ಕಿರಣದ ನೆರವೊಂದಿದ್ದರೆ
ಕೊಚ್ಚೆಯ ಜಲವೂ ಬೆಳ್ಳಿ.
*****