ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿ ವಿವೇಕ್ ಶಾನಭಾಗರ ‘ಇನ್ನೂ ಒಂದು’ ಕಾದಂಬರಿಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಕೃತಿಯ ಲೋಪಗಳನ್ನು ತೋರಿಸುವ ವಿಮರ್ಶಕ ಪ್ರವೃತ್ತಿ ನನ್ನದಲ್ಲ, ಓದುಗನಾಗಿ ಈ ಕಾದಂಬರಿ ಎತ್ತಿರುವ ಅನೇಕ ಮಹತ್ವದ ಪ್ರಶ್ನೆಗಳನ್ನು ಗುರುತಿಸುವ ಮೂಲಕ ಈ ಕೃತಿ ಒಡ್ದುವ ಸಂವಾದಕ್ಕೆ ಕನ್ನಡಸಾಹಿತ್ಯ.ಕಾಂ ತೆರೆದುಕೊಳ್ಳಲಿ ಎಂಬ ಸದುದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಅನಂತಮೂರ್ತಿಯವರ ‘ದಿವ್ಯ’ ದಂತೆಯೆ ಈ ಕಾದಂಬರಿಯನ್ನೂ ಸಂಕ್ಷಿಪ್ತಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಕೃತಿಯ ಇಡೀ ಪಠ್ಯವನ್ನು ನೀಡಿ ಮಾರಾಟಕ್ಕೆ ಧಕ್ಕೆ ತರಬಾರದೆಂಬದು ಎಂಬ ನಂಬಿಕೆಯನ್ನು ಪ್ರತಿಪಾದಿಸುತ್ತ ನೂರ ಹನ್ನೊಂದು ಪುಟದ ಈ ಕೃತಿಯನ್ನು ಪ್ರಕಟಣೆ: ಅಕ್ಷರ ಪ್ರಕಾಶನ, (ಸಾಗರ) ,ಕರ್ನಾಟಕ. ಬೆಲೆ ರೂ: ೫೦.೦೦. ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಿ ತಳಮಳಕ್ಕೀಡುಮಾಡಿಬಿಡುವ ಈ ಕೃತಿಯನ್ನು ಓದಿ ಪ್ರತಿಕ್ರಿಯಿಸಿದರೆ, ಉತ್ತಮ ಚರ್ಚೆಯೊಂದಕ್ಕೆ ದಾರಿಯಾಗುತ್ತದೆ ಎಂಬ ವಿಶ್ವಾಸವಿದೆ.
Related Posts
ಸಂಭ್ರಮ ಶೋಕ – ಸಾಮೂಹಿಕ ಪ್ರಯತ್ನ
- ಶೇಖರ್ ಪೂರ್ಣ
- ಆಗಷ್ಟ್ 3, 2003
- 0
ಸಂಭ್ರಮ: ಯಶವಂತ ಚಿತ್ತಾಲ ಹಾಗು ಚನ್ನವೀರ ಕಾಣವಿಯವರಿಗೆ ಎಪ್ಪತ್ತೈದು. ಈ ಅವರ ಕೃತಿಗಳನ್ನು ಸ್ಮರಿಸಿಕೊಳ್ಳುವುದರ ದೃಷ್ಟಿಯಿಂದ ಈ ಸಂಚಿಕೆಯ ಬಹುಭಾಗ ಆ ದೊಡ್ಡಜೀವಗಳಿಗೆ ಮೀಸಲಾಗಿಟ್ಟಿರುವುದು ಸ್ಪಷ್ಟವಾಗಿದೆ. ಅಹಂಕಾರವೋ- ಕೃತಿಗಿಂತಲೂ ಅಧಿಕವಾದದ್ದನ್ನು ಲೇಖಕ ಹೇಳಲಾಗದು ಎಂಬ […]
ಇಂಗ್ಲಿಷ್ಮಯದ ನಡುವೆಯೂ ಕನ್ನಡದ ಒಂದು ಪುಟ್ಟ ಸಂಭ್ರಮ
- ಶೇಖರ್ ಪೂರ್ಣ
- ಮೇ 19, 2001
- 0
ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್ಮಯ ಅಥವ ಇಂಗ್ಲಿಷ್ ಹೊರತಾದ […]
ಸಂಭ್ರಮಕ್ಕೆ ನೂರಾರು ಕಾರಣಗಳು..
- ಶೇಖರ್ ಪೂರ್ಣ
- ಜನವರಿ 1, 2007
- 0
ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […]
