ಕ್ರಾಂತಿಕಲಿ

ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ-
ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ
ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ
ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ!

ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ
ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ
ಪಂಜಿನೊಲು ಪರಿಸರವ ಪ್ರತಿನಿಧಿಸಿ, ಹೆಗ್ಗುರಿಯ
ತೋರುವುದು! ಭಾರತದ ಬಿಡುಗಡೆಯ ಬವರದಲಿ

ಕನ್ನಾಡ ವೀರ ವಾಲಿಯ ದಂಡು ಕಾಳೆಗದ
ಮುಖದಲ್ಲಿ ಮಸಗಿದುದು- ಕಣ್ಣೆವೆಯ ಮುಚ್ಚಿ ತೆರೆ-
ವನಿತರೊಳೆ ಅಚ್ಚರಿಯ ಕೃತಿ ನೂರು ಬೆಟ್ಟದೊರೆ!
ಪಡವಳನಸೀಮ ಸಾಹಸ ನಾಡ ಬಾವುಟದ

ಹೆಮ್ಮೆ; ಧೃತಿಗೆಡದ ಕೃತಿವೀರನೇಗಳು ಗೆಲ್ಗೆ!
ನಾಡಸೇವೆಯಲಿಂತು ಉತ್ಸಾಹದಿಂ ಬಾಳ್ಗೆ.
*****