ಅಪಮೌಲ್ಯೀಕರಣ

ಜಗಜ್ಯೋತಿ ಎನ್ನಿಸಿದ
ಮಹಾ ಜಾತ್ಯತೀತ ಚೇತನವನ್ನು
ಅನುಯಾಯಿಗಳು
‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು
ಬಸವ
ಳಿದುಹೋದ;
ತನ್ನ ದಿವ್ಯ ಸಂದೇಶಗಳ ಪಾಲಿಗೆ
ಬಸವ
ಅಳಿದು ಹೋದ.
*****