ಶ್ರೀ ರಾಮಾಯಣ ದರ್ಶನವನೋದಿ

ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ

ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆ
ಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ,

ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿ
ತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ!

ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದ
ಬಾನಮುಡಿಗೇರಿ ಬೆಳಕಿನ ಗರ್ಭಗುಡಿಯಿಂದ

ಮಿಡಿಯಿತೊಂದದ್ಭುತೋಂಕಾರ ವೀಣಾರವಂ !
ಗುಣಕೆ ಮತ್ಸರವುಂಟೆ ? ದೇಗುಲದ ಗಂಟೆಯುಲಿ

ಕಂಬ ಕಂಬವ ತುಂಬಿ ಮೈದುಂಬಿ ನಿಂತ ಬಗೆ
ನಿಂತೆ ; ನಿಂತೆನೆ ? ನಾದ ತಂತುವಾದೆನು ಕೊನೆಗೆ

ರಸ‌ಋಷಿಯ ಪದ್ಮಶಾಂತಿಯ ಪರ್‍ಣಶಾಲೆಯಲಿ

ಯುಗಯುಗಕು ಸಾಗಿರುವ ಜಗದ ರಾಮಾಯಣಂ
ನೂರು ಸೂರ್ಯೋದಯದ ಬಿಂಬ ಕವಿದರ್ಶನಂ!

ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ: ದೋಷ ತಿದ್ದುಪಡಿ: ಕಿಶೋರ್‍ ಚಂದ್ರ


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.