ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಕೊನೆಯ ಬಯಕೆ ನಿಸಾರ್ ಅಹಮದ್ ಕೆ ಎಸ್ ಮಾರ್ಚ್ 20, 2026 0 “ಏ! ಮುದಿ ಮುಲ್ಲಾ, ಕೇಳಿಕೋ ಏನುಬೇಕೋ ಎಲ್ಲ, ಸಂಜೆಗೆ ಏರಬೇಕಿದೆ ಗಲ್ಲು!” “ಪೀಪಾಯಿಯಷ್ಟು ಕಳ್ಳು ಒಬ್ಬ ಹೆಣ್ಣು : ನೋಡೋಕೆ ಬ್ಯೂಟಿಫುಲ್ಲು, ಹಾಗೇ ಕಡಿಯೋಕೆ ಕೊನೇ ಸಲ ಮೂಳೆ ಕಟ್ಟಿಸಿಕೊಡು ಮುವತ್ತೆರಡು ಹಲ್ಲು!” *****
ಹನಿಗವನ ಸಮಸ್ಯೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 18, 2023 0 ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****
ಹನಿಗವನ ಸಾಮ್ಯ ನಿಸಾರ್ ಅಹಮದ್ ಕೆ ಎಸ್ ಜುಲೈ 10, 2023 0 ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. *****