ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಮಾತಿನ ಗುಟ್ಟು ನಿಸಾರ್ ಅಹಮದ್ ಕೆ ಎಸ್ ಜುಲೈ 4, 2025 0 `ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್ಬಹುದು ದೊಡ್ಡ ದೊಡ್ಡ ಪೊಟ್ನ”.*****
ಹನಿಗವನ ಅಸ್ತಮಾನ ನಿಸಾರ್ ಅಹಮದ್ ಕೆ ಎಸ್ ಜನವರಿ 9, 2023 0 ರವಿ ಕೂತಿದ್ದಾನೆ ಪಡುವಣದ ಅಂಗಡಿಯಲ್ಲಿ ಸೀರೆಗಳ ಹ ರವಿ. *****
ಹನಿಗವನ ಪ್ರಸ್ನೆ – ಹುತ್ತರ ನಿಸಾರ್ ಅಹಮದ್ ಕೆ ಎಸ್ ಡಿಸೆಂಬರ್ 19, 2025 0 “ಹಲ್ಪ ಪ್ರಾಣ ಮಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****