ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ವಿಶಿಷ್ಟತೆ ನಿಸಾರ್ ಅಹಮದ್ ಕೆ ಎಸ್ ಮೇ 31, 2024 0 ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. *****
ಹನಿಗವನ ವಿಧಾಯಕ ನಿಸಾರ್ ಅಹಮದ್ ಕೆ ಎಸ್ ಮೇ 29, 2023 0 ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
ಹನಿಗವನ ದೃಷ್ಟಿ ನಿವಾರಣೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 4, 2023 0 ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****