ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಬೆದರುಬೊಂಬೆ ನಿಸಾರ್ ಅಹಮದ್ ಕೆ ಎಸ್ ಮಾರ್ಚ್ 29, 2024 0 ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
ಹನಿಗವನ ಸ್ಥಾನಾಂತರ ನಿಸಾರ್ ಅಹಮದ್ ಕೆ ಎಸ್ ನವೆಂಬರ್ 13, 2023 0 ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****
ಹನಿಗವನ ಮರುಕ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 17, 2026 0 ಗಡಗಡ ನಡುಗಿ ಬತ್ತಲೆ ಮೈಯಲ್ಲಿ ಕೂಲಿ ಹುಡುಗ ಅಂಗಡಿ ಎದುರು ಸತ್ತ; ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ. ಒಮ್ಮೆ ಊರಾಚೆ ಹೋದಾಗ ಮಳೆ ಬಂದು ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು” ಅಂತ ಶೆಟ್ಟಿ […]