ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ಶಿಶು ಕಂಡ ಕನಸು ಚನ್ನವೀರ ಕಣವಿ ಜೂನ್ 18, 2025 0 ೧ ಇವನ ಹಾಲ್ದುಟಿಯಂಚಿನಲ್ಲಿ ಮಿಂಚುವ ನಗೆಯು ತುಂಬುಗಣ್ಣುಗಳಲ್ಲಿ ಹೊಳೆವ ಬದುಕು, ಧ್ವನಿತರಂಗದಲೆದ್ದು ತೇಲಿ ಬರುತಿಹ ನಾದ ಚಂದ್ರ-ದೋಣಿಯನೇರಿ ಹುಟ್ಟು ಹಾಕು- ಹೂವಿಗೆರಗಿದ ತುಂಬಿ, ಸಿಂಪಿಗೊರಗಿದ ಮುತ್ತು ತಂಪುಗಾಳಿಗೆ ಬಿರಿದ ಸಂಪಿಗೆಯ ಮೊಗ್ಗು, ತೆಂಗಿನೊಳಗಿನ ತಿಳಿಲು, […]
ಕವನ ಸಿಂಬಲಿಸ್ಟ್ ಕಾವ್ಯ ಅನಂತಮೂರ್ತಿ ಯು ಆರ್ ಜೂನ್ 5, 2023 0 -ವೆರ್ಲೆನ್ ಮುಖ್ಯವಾದ್ದು ನಾದ ನಯವಾಗದಂತೆ ವಕ್ರ ಬಳಕುವ ಲಯ ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ ಘನವಾಗದ ಚಂಚಲ ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ ಇಂಗಿತದ ಸೂಕ್ಷ್ಮ, ಮಾತಿಗೆ ದಕ್ಕದಂತೆ ಮಿಗುವ ಮೌನ […]
ಕವನ ಸಾಮರಸ್ಯ ಚನ್ನವೀರ ಕಣವಿ ಅಕ್ಟೋಬರ್ 2, 2024 0 ಹೃದಯದರವಿಂದವೇ ಮನದ ಮಂದಾರವೇ ಒಳುಗುಂದದಮಲ ಸೌರಭಸಾರವೆ! ಅರಳಿರುವ ದಲದಲದಿ ನಿನ್ನ ಪದತಲವಿರಿಸಿ ಚಿತ್ತೈಸು ನನ್ನೊಲವೆ ನನ್ನ ಬಲವೆ! ತೆಳ್ಳತೆಳ್ಳನೆ ತೀಡಿ ಮೆಲ್ಲಮಲ್ಲನೆ ಹಾಡಿ ಒಯ್ಯನೊಯ್ಯನೆ ಒಲಿವ ತಂಗಾಳಿಯು ನಿನ್ನುಸಿರ ನರುಗಂಪು ನಿಚ್ಚಪ್ರಸಾದವದು ಪ್ರಣವನಾದವಗೈವ ಶೃಂಗಾಳಿಯು! […]