ಕನ್ನಡ ಮಾಧ್ಯಮ Posted on ಮೇ 2, 2025ಮೇ 4, 2025 by ನಿಸಾರ್ ಅಹಮದ್ ಕೆ ಎಸ್ ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಹನಿಗವನ ಪವಾಡ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಹನಿಗವನ ಘೋಷಣೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 17, 2023 0 “ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]
ಹನಿಗವನ ಹಿತೋಪದೇಶ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 6, 2023 0 ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****